ಯಕ್ಷಗಾನದ `ಕೃಷ್ಣ` ಕಣ್ಣಿಮನೆ ಗಣಪತಿ ಭಟ್ ಇನ್ನಿಲ್ಲ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಫೆಬ್ರವರಿ 18 , 2016
|
ಖ್ಯಾತ ಯಕ್ಷಗಾನ ಕಲಾವಿದ ಕಣ್ಣಿಮನೆ ಗಣಪತಿ ಭಟ್(47) ವಿಧಿವಶರಾಗಿದ್ದಾರೆ. ಬಹು ಅಂಗಾಗ್ಯ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು. ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಗಯಾಗದೇ ಅವರು ವಿಧಿವಶರಾದರು.
ವಿಶಿಷ್ಟ ಹಾಗೂ ಲಯಬದ್ಧ ಕುಣಿತಕ್ಕೆ ಹೆಸರಾಗಿದ್ದ ಕಣ್ಣಿಮನೆ ಅವರನ್ನು ಕಳೆದುಕೊಂಡ ಯಕ್ಷ ಲೋಕ ಬರಿದಾಗಿದೆ. ಅವರ ಅಪಾರ ಅಭಿಮಾನಿಗಳಲ್ಲಿ ನೋವು ಮನೆ ಮಾಡಿದ್ದು ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಡಗು ತಿಟ್ಟಿನ ಲಯಬದ್ಧದ ಕುನಿತಗಾರ ಇನ್ನಿಲ್ಲ ಎಂಬುದನ್ನು ಅಭಿಮಾನಿ ವರ್ಗ ಒಪ್ಪಿಕೊಳ್ಳುತ್ತಿಲ್ಲ.
ಸದಾ ಯಕ್ಷಗಾನಕ್ಕೆ ಹೊಸತನವನ್ನು ನೀಡಿದ್ದ ಕಣ್ಣಿಮನೆ ರಂಗದ ಮೇಲೆ ಸಂಚಲನವನ್ನೇ ಸೃಷ್ಟಿಸುತ್ತಿದ್ದರು. ಅವರ ಕೃಷ್ಣ, ಲವ-ಕುಶ, ಸುಧನ್ವ ಪಾತ್ರಗಳನ್ನು ಅಭಿಮಾನಿ ವರ್ಗ ಮರೆಯಲು ಸಾಧ್ಯವಿಲ್ಲ. ಅಭಿಮನ್ಯು ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕಣ್ಣಿಮನೆ ಇನ್ನು ನೆನಪು ಮಾತ್ರ. ಸಾಲಿಗ್ರಾಮ, ಮಂದರ್ತಿ, ಪೆರ್ಡೂರು ಮೇಳಗಳಲ್ಲಿ ವೇಷ ಹಾಕುತ್ತಿದ್ದ ಕಣ್ಣಿಮನೆ ಯುವ ಯಕ್ಷ ಅಭಿಮಾನಿಗಳ ಫೆವರೇಟ್ ಆಗಿದ್ದರು. ಅತಿಥಿ ಕಲಾವಿದರಾಗಿಯೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಕಳೆದ ನವೆಂಬರ್ ವೇಳೆ ಶಿರಸಿಯಲ್ಲಿ ಬಣ್ಣ ಹಚ್ಚಿದ್ದು ಅವರ ಕೊನೆಯ ಪ್ರದರ್ಶನವಾಗಿತ್ತು.
*********************
ಕೃಪೆ :
kannada.oneindia.com
|
|
|